ಜುಲೈ22ಕ್ಕೆ ದಿ. ಪಾದೂರು ಸುಂದರ ದೇವಾಡಿಗರ ಉತ್ತರಕ್ರಿಯೆ
ಜುಲೈ22ಕ್ಕೆ ದಿ. ಪಾದೂರು ಸುಂದರ ದೇವಾಡಿಗರ ಉತ್ತರಕ್ರಿಯೆ ನೆಡಯಲಿದೆ. ಅವರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.
ವೇಣೂರು ದೇವಾಡಿಗರ ಸೇವಾ ವೇದಿಕೆಯ ಸ್ಥಾಪಾಕಾಧ್ಯಕ್ಷರಾದ ಪೂಜ್ಯರಾದ ಶ್ರೀ ಪಿ.ಎಸ್ ದೇವಾಡಿಗ ಇವರು ದಿನಾಂಕ 10-07-2018ನೇ ಮಂಗಳವಾರ ದಂದು ದೈವಾದೀನರಾಗಿರುವುದು ತಮಗೆಲ್ಲರಿಗೂ ತಿಳಿದಿರುವ ವಿಚಾರ. ಇವರ ಮುಂದಿನ ಸದ್ಗತಿಗೋಸ್ಕರ ಉತ್ತರ ಕ್ರಿಯೆಯೂ ದಿನಾಂಕ 22-07-2018ನೇ ರವಿವಾರದಂದು ದೇವಾಡಿಗ ಸಮುದಾಯ ಭವನದಲ್ಲಿ ನಡೆಯಲಿದ್ದು ಅದೇ ದಿನ ಬೆಳಗ್ಗೆ 11.30 ಕ್ಕೆ ಸರಿಯಾಗಿ ದೇವಾಡಿಗರ ಸೇವಾ ವೇದಿಕೆಯ ವತಿಯಿಂದ ಪೂಜ್ಯರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಎಲ್ಲಾ ದೇವಾಡಿಗ ಸಮಾಜ ಬಾಂಧವರು ಇದನ್ನೇ ವೈಯಕ್ತಿಕ ಆಮಂತ್ರಣ ಎಂದು ತಿಳಿದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ನಮ್ಮ ಕಳಕಳಿಯ ವಿನಂತಿ.